ಸಂಪಾಜೆ ಶೀನಪ್ಪ ರೈಗಳಿಗೆ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಆಗಸ್ಟ್ 1 , 2013
|
ಉಡುಪಿ , ಆಗಸ್ಟ್ 1 , 2013
|
ಸಂಪಾಜೆ ಶೀನಪ್ಪ ರೈಗಳಿಗೆ ಪ್ರಶಸ್ತಿ ಪ್ರದಾನ
ಉಡುಪಿ :
ಪ್ರಸಂಗ ಪಠ್ಯ ಒಂದೇ ಆದರೂ ಕಲಾವಿದರ ಸಾಮರ್ಥಯದಿಂದಾಗಿ ಕಲಾಭಿವ್ಯಕ್ತಿ ಭಿನ್ನವಾಗಿರುವುದರಿಂದ ಒಮ್ಮೆ ವೀಕ್ಷಿಸಿದ ಆಖ್ಯಾನವನ್ನೇ ಇನ್ನೊಮ್ಮೆ ನೋಡಿದಾಗ ನೋಟಕನಿಗೆ ಅದು ಬೇರೆಯೇ ರಂಗಪ್ರಸ್ತುತಿಯಂತೆ ಕಾಣುವುದು ಯಕ್ಷಗಾನದ ವೈಶಿಷ್ಟ್ಯ. ಈ ಗುಣದಿಂದಲೇ ಯಕ್ಷಗಾನ ಶ್ರೇಷ್ಠ ಕಲೆ ಎಂದು ಮಾನ್ಯವಾಗಿದೆ ಎಂದು ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.
|
ಸಂಪಾಜೆ ಶೀನಪ್ಪ ರೈ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿಯನ್ನು ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರದಾನ
|
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ಶೀನಪ್ಪ ರೈ ಅವರು ಮಾತನಾಡಿ, ನನ್ನ 57 ವರ್ಷಗಳ ಕಲಾ ವ್ಯವಸಾಯದಿಂದ ತೃಪ್ತನಾಗಿದ್ದೇನೆ. ಪರ್ಯಾಯ ಶ್ರೀಗಳಿಂದ ಪ್ರಶಸ್ತಿ ಪಡೆದಿರುವುದು ಸ್ಮರಣೀಯ ಕ್ಷಣವಾಗಿದೆ ಎಂದು ಧನ್ಯತೆಯನ್ನು ವ್ಯಕ್ತಪಡಿಸಿದರು.
ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರವನ್ನು ನಾರಾಯಣ ಎಂ. ಹೆಗಡೆ ವಚಿಸಿದರು. ಡಾ| ನರೇಂದ್ರ ಶೆಣೈ ವಂದಿಸಿದರು. ನಳಿನಿ ಸುಬ್ರಹ್ಮಣ್ಯ ಭಟ್, ಡಾ| ಶೈಲಜಾ, ಜೈದೀಪ್ ಹಾಗೂ ರಮ್ಯಲಕ್ಷ್ಮೀ ಉಪಸ್ಥಿತರಿದ್ದರು.
|
|
|